ಕಿಟೋಶೀ ಒಂದು ಹೊಸ ಯುಗದ ಶಿಲೀಂಧ್ರ ನಾಶಕವಾಗಿದ್ದು, ಇದು ಅನೇಕ ರೋಗಗಳ ವಿರುದ್ಧ ಹೋರಾಡುವ ಸಾಮರ್ಥ್ಯ ಹೊಂದಿದೆ. ಕಿಟೋಶೀ ಎಲ್ಲಾ ರೀತಿಯ ಬೆಳೆಗಳಲ್ಲಿ ಕಂಡುಬರುವ ರೋಗವನ್ನು ಮೂಲದಿಂದಲೇ ನಿವಾರಿಸುತ್ತದೆ ಮತ್ತು ರೋಗ ಹರಡದಂತೆ ತಡೆಯುತ್ತದೆ ಅಂತ್ರಾಕ್ಟೋಸ್, ತುಕ್ಕು ರೋಗ, ಎಲೆ ಚುಕ್ಕೆ ರೋಗ, ಕಪ್ಪೆ ಕಣ್ಣಿನಂತಹ ಎಲೆ ಚುಕ್ಕೆ ರೋಗ, ಸರ್ಕೊಫ್ಲೋರಾ ಮತ್ತು ಹಣ್ಣು ಕೊಳೆರೋಗ, ಹೀಗೆ ಅನೇಕ ರೀತಿಯ ರೋಗಗಳಿಗೆ ಬೆಳೆಗಳು ತುತ್ತಾಗುತ್ತವೆ.
ಇಂತಹ ರೋಗಗಳನ್ನು ತಡೆಗಟ್ಟುವುದು ಬಹಳ ಮುಖ್ಯ, ಇಲ್ಲದಿದ್ದರೆ ಇಳುವರಿಯಲ್ಲಿ ಗಮನಾರ್ಹ ಇಳಿಕೆ ಕಂಡುಬರುತ್ತದೆ ಮತ್ತು ಉತ್ಪನ್ನಗಳ ಗುಣಮಟ್ಟ ಕೂಡ ಹೆಚ್ಚಿನ ಪ್ರಮಾಣದಲ್ಲಿ ಕುಸಿಯುತ್ತದೆ.
ಕಿಟೋಶೀಯ ಕಾರ್ಯತಂತ್ರ ಎರಡು ವಿಧಾನದಲ್ಲಿ ಇರುತ್ತದೆ, ಇದು ಗಿಡದ ಸಂರಚನೆಯನ್ನು ಭೇದಿಸಿ ರೋಗದ ಸಂಪರ್ಕಕ್ಕೆ ಬಂದು ಅದನ್ನು ನಾಶಪಡಿಸುವ ಕೆಲಸ ಮಾಡುತ್ತದೆ. ಇದರಿಂದಾಗಿ ಗಿಡವನ್ನು ದೀರ್ಘಕಾಲದವರೆಗೂ ರೋಗಮುಕ್ತವಾಗಿ ಇರಿಸಬಹುದಾಗಿದೆ.
ಕಿಟೋಶೀ ರೋಗ ಕಂಡುಬರುವುದಕ್ಕೆ ಮೊದಲು ಮತ್ತು ಬಂದ ಮೇಲೆ ಎರಡೂ ಸಂದರ್ಭಗಳಲ್ಲಿ ಪರಿಣಾಮಕಾರಿಯಾಗಿದೆ, ಆದರೆ ಕಿಟೋಶೀಯನ್ನು ನಿವಾರಕ ಹಂತದಲ್ಲಿ ಬಳಸಿದರೆ (ಪ್ರಿವೆಂಟಿವ್) ನಿಮ್ಮ ಬೆಳೆ ರೋಗಮುಕ್ತವಾಗುತ್ತದೆ ಮತ್ತು ಇಳುವರಿ ಹೆಚ್ಚಾಗುತ್ತದೆ.
ಸರ್ಕೋಸ್ಕೋರಾ ಎಲೆ ಚುಕ್ಕೆ ರೋಗ
ಲಕ್ಷಣವೇನು? ಎಲೆಗಳ ಗಾಯಗಳು ಸಾಮಾನ್ಯವಾಗಿ ಕಂದು ಬಣ್ಣ ಮತ್ತು ವೃತ್ತಾಕಾರವಾಗಿರುತ್ತದೆ. ಗಾಯದ ಮಧ್ಯಭಾಗದಲ್ಲಿ ಚಿಕ್ಕದ್ದರಿಂದ ದೊಡ್ಡದಾದ ತಿಳಿ ಕಪ್ಪು ಬಣ್ಣ ಇರುತ್ತದೆ ಮತ್ತು ಅಂಚುಗಳಲ್ಲಿ ಗಾಡ ಕಂದು ಬಣ್ಣ ಇರುತ್ತದೆ. ಗಾಯ ೧ ಸೆಂಟಿಮೀಟರ್ ನಷ್ಟು ದೊಡ್ಡದಾಗಿರುತ್ತದೆ ಮತ್ತು ಕೆಲವೊಮ್ಮೆ ಸಂಪೂರ್ಣ ಎಲೆಯನ್ನು ವ್ಯಾಪಿಸಿರುತ್ತದೆ. ಕಾಂಡ ರೆಂಬೆ ಮತ್ತು ಹಣ್ಣುಗಳ ಮೇಲೆ ಈ ಗಾಯ ಸುಲಭವಾಗಿ ವ್ಯಾಪಿಸಿಬಿಡುತ್ತದೆ.
ಆಲ್ಟರ್ನೇರಿಯಾ ಚುಕ್ಕೆ ರೋಗ
ಲಕ್ಷಣವೇನು? ಆಲ್ಟರ್ನೇರಿಯಾ ಚುಕ್ಕೆ ರೋಗದಲ್ಲಿ ಎಲೆಗಳ ಮೇಲೆ ದೊಡ್ಡ ಚುಕ್ಕೆಗಳು ಎಲೆಗಳ ಅಂಚಿನಿಂದ ವ್ಯಾಪಿಸುತ್ತವೆ, ಅದರ ಮೇಲೆ ಅಂಗಮಾರಿ ಆಕಾರ ಪಡೆದುಕೊಳ್ಳುತ್ತದೆ. ಇದರಿಂದಾಗಿ ಎಳೆ ಕೊಳೆತು ಉದುರಲು ಆರಂಭೀಸುತ್ತದೆ. ಆಲ್ಟರ್ನೇರಿಯಾ ರೋಗದಲ್ಲಿ ಹಣ್ಣು ಕೊಲೆಯುವುದು ಕೂಡ ಉಂಟಾಗುತ್ತದೆ. ಹಣ್ಣಿನ ಕೊನೆಯಿಂದ ಆರಂಭವಾಗಿ ಸಂಪೂರ್ಣ ಹಣ್ಣಿನ ಮೇಲೆ ಚುಕ್ಕೆಗಳು ಹರಡಿಬಿಡುತ್ತವೆ.
ಹಣ್ಣು ಕೊಳೆತ ಮತ್ತು ರೆಂಬೆ ನಾಶ ರೋಗ
ಲಕ್ಷಣವೇನು? ಮೆಣಸಿನ ಬೆಳೆಯಲ್ಲಿ ಈ ರೋಗ ಒಂದು ಶಿಲೀಂಧ್ರದಿಂದ ಉಂಟಾಗುತ್ತದೆ (ಕೋಲೆಟೋಟ್ರಾಲ್ಕಮ್ ಕೈಪಿ), ಪ್ರಭಾವಕ್ಕೊಳಗಾದ ಮಾಗಿದ ಹಣ್ಣುಗಳ ಮೇಲೆ ಕಂದು ಅಥವಾ ಕಪ್ಪು ಬಣ್ಣದ ಚುಕ್ಕೆ ಮೂಡುತ್ತದೆ, ಇದರ ಮಧ್ಯದಲ್ಲಿ ಕಪ್ಪು ಬಣ್ಣದ ಚುಕ್ಕೆಯ ಆಕಾರ ಮೂಡುತ್ತದೆ, ಇದು ಶೀಲೀಂಧ್ರದ ಬೀಜಕಗಳಾಗಿರುತ್ತವೆ (ಬಸರ್ ಬ್ರುಲಾಯಿ) ಪ್ರಭಾವಕ್ಕೊಳಗಾದ ಹಣ್ಣುಗಳ ಬೀಜದ ಮೇಲೆ ಕೂಡಾ ಶಿಲೀಂಧ್ರ ಉಂಟಾಗುತ್ತದೆ ಮತ್ತು ಹಣ್ಣು ಮುದುರಿ ಪೂರ್ತಿಯಾಗಿ ಒಣಗಿಹೋಗುತ್ತದೆ.
ಈ ಶಿಲೀಂಧ್ರದ ಕಾರಣದಿಂದಾಗಿ ಡೈಬ್ಯಾಕ್ ರೋಗ ಕೂಡ ಬರುತ್ತದೆ, ಇದರಲ್ಲಿ ಎಲ್ಲಕ್ಕಿಂತ ಮೊದಲು ರೆಂಬೆಗಳು ಒಣಗಲು ಆರಂಭಿಸುತ್ತವೇ ಮತ್ತು ಸಂಪೂರ್ಣ ರೆಂಬೆಯೇ ಒಣಗಿಹೋಗುತ್ತದೆ ಮತ್ತು ಗಿಡ ಮುದುಡಿ ಹೋಗುತ್ತದೆ. ಈ ರೋಗದ ಲಕ್ಷಣ ಗಿಡದ ಮೇಲ್ಬಾಗದಿಂದ ಆರಂಭವಾಗಿ ಕೆಳಗಿನ ಭಾಗಕ್ಕೆ ಸಾಗುತ್ತದೆ.ಒಣಗಿಹೋದ ರೆಂಬೆಗಳ ಮೇಲೆ ಕಪ್ಪು ಚುಕ್ಕೆಯಂತಹ ಆಕಾರ ಹಾರದಿರುತ್ತದೆ.
ಪ್ರಮಾಣ - ಕೀಟೋಶಿಯ ಪ್ರಮಾಣ 250 ಮಿ.ಲೀ ಎಕರೆ
ಯಾವಾಗ ಮಾಡಬೇಕು: -
ಮೊದಲ ಸಿಂಪರಣೆ: ರೋಗ ಆರಂಭವಾಗುತ್ತಿದ್ದಂತೆಯೇ ಎಲೆಗಳ ಮೇಲೆ ಗುಂಡಗಿನ ಆಕಾರದ ಕಂದು ಬಣ್ಣದ ಚುಕ್ಕೆ ಕಂಡುಬರುತ್ತದೆ ಆಗ ಕಿಟೋಶೀ ಮತ್ತು ವೇಲೀಡಾ ಎರಡನ್ನೂ ಮಿಶ್ರ ಮಾಡಿ ಸಿಂಪರಣೆ ಮಾಡಬೇಕು.
ಎರಡನೇ ಸಿಂಪರಣೆ:ಹೂವು ಮತ್ತು ಹಣ್ಣು ಮೂಡಿದಾಗ ಕೀಟೋಶೀ ಮತ್ತು ವೆಲೀಡಾ ಮಿಶ್ರ ಮಾಡಿ ಸಿಂಪರಣೆ ಮಾಡಬೇಕು.
ನೀರಿನ ಪ್ರಮಾಣ - 125 - 150 ಲೀಟರ್ ನಷ್ಟು ಇರಬೇಕು ಇದರಿಂದಾಗಿ ಗಿಡ ಉತ್ತಮವಾಗಿ ತೊಳೆಯಲ್ಪಡಬಹುದು.
Safety Tips:
***The information provided on this website is for reference only. Always refer to the product label and the leaflet for full description and instructions for use.